ಹಕ್ಕಿಗಳು

ಬಂಧನದ ಬಲೆಯೊಳಗೆ ಸಿಲುಕಿ ನರಳದೆ ಸುಳಿವ
ಪಕ್ಷಿ ಕೂಟವೆ! ನಿಮ್ಮ ಬಾಳ್ವೆ ಲೇಸು
ರೆಕ್ಕೆಗಳ ಪಸರಿಸುತ ಕುಪ್ಪಳಿಸಿ ನೆಗೆದೋಡಿ
ಬಯಲೊಳಗೆ ಸಂಚರಿಪ ಬದುಕೆ ಲೇಸು

ಗೆಳೆಯರೆಲ್ಲರು ಕೂಡಿ ಸೊಗದ ಬನಗಳ ಸೇರಿ
ಚಿಲಿಪಿಯ ಧ್ವನಿಗೈವ ಪರಿಯೆ ಲೇಸು
ಮರದಿಂದ ಮರಕೋಡಿ ದೊರೆತ ಫಲಗಳ ಕಚ್ಚಿ
ಬಾಯಿ ಬಾಯಿಗೆ ಕೊಡುವ ಮಮತೆ ಲೇಸು

ಗಿರಿಶಿಖರಗಳ ದಾಟಿ ಭ್ರಮರಗಳ ತೆರದಂತೆ
ಆಗಸದಿ ಸುತ್ತುವಾ ಅರ್ತಿ ಲೇಸು
ಸಹಚರಿಗಳೊಡಗೂಡಿ ಕ್ಷಣಕಾಲ ಧರೆಗಿಳಿದು
ಎಡಬಲಕೆ ಕಣ್ಣಿಡುವ ಸೊಬಗೆ ಲೇಸು

ವಾಯು ವೇಗದಿ ಸಾಗಿ ಹಿಂಡು ಹಿಂಡಾಗಿ ನಿಡು
ಸಾಗರವ ದಾಟುವಾ ಪಯಣ ಲೇಸು
ಹಕ್ಕಿಗಳೆ ಬಿಸಿಲೊಳಗೆ ರೆಕ್ಕೆಗಳನರಳಿಸುತ
ಮಕ್ಕಳಿಗೆ ನೆರಳೀವ ಪ್ರೀತಿ ಲೇಸು

ಮೃಗ ಕೀಟಗಳ ಜನರ ಬಾಧೆ ನಿಮಗಿಲ್ಲ
ಲೋಹನಿರ್ಮಿತದಿಚ್ಛೆಗಳಿಗೆ ಸಿಲುಕದೆಯೆ
ಬಗೆಬಗೆಯ ನೋಟಗಳ ನೋಡಿ ನಲಿಯುವಿರಿ
ಜನಕಜೆಗೆ ನಿಮ್ಮ ಜೀವನವೆ ಬಹುಸೊಗಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ದಿನ…
Next post ಬಿಂದಿಗೆ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys